ಇಂದ್ರಜಿತ್
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ : ಎಸ್ ಪಿ ಬಿ , ಚಂದ್ರಿಕಾ ಗುರುರಾಜ
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ ..
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ
ಓ..ಹೋ ಮುಂಜಾವಿನ ಹೂಮೇಲಿನ ಆ ಮಂಜಿನ ನಗು ಇಲ್ಲಿದೇ
ಆ..ಹಾ ಅನುರಾಗದ ಆ ಮೋದದ ಆನಂದದ ಹಾಡಿಲ್ಲಿದೆ
ಈ ಕಣ್ಣ ಕೊಳದ ಹಂಸವೇ ನೀನು ಹೃದಯ ಮಿಡಿಯುವೇ
ಈ ನನ್ನ ಎದೆಯ ತುಡಿತವೇ ನೀನು ನನ್ನ ನುಡಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನಾ ಮುಗಿಯದ ಪಯಣದ ನಡುವೆಯೂ
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ
ಓ..ಹೋ ಇತಿಹಾಸದ ಛಲಗಾರರ ಬೆನ್ನಹಿಂದೆಯೇ ಹೆಣ್ಣೊಂದಿದೇ
ಈ.. ಹೋರಾಟದ ಬಲವೆಲ್ಲವೂ ಈ ನಿನ್ನಯ ಒಲವಲ್ಲಿದೆ
ಈ ಉಸಿರ ಮೇಲೆಯೇ ನಿನ್ನಯ ಹೆಸರು ನಾನು ಬರೆಯುವೇ
ಈ ಹೆಸರ ನೆನಪು ಮರೆಯದೇ ನಾನು ಹೀಗೆ ಉಳಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನಾ ಮುಗಿಯದ ಪಯಣದ ನಡುವೆಯೂ
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ ..
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
No comments:
Post a Comment
Note: Only a member of this blog may post a comment.