ಕೆ.ಎಸ್. ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆ
ವಿರಹಿಣಿ..........ಕವನ ಸಂಕಲನ-ಮೈಸೂರ ಮಲ್ಲಿಗೆ
--------------------------------------
ಹನ್ನೆರಡು ದುಃಖಗಳು ನನ್ನಾಹುತಿಗೊಂಡಿವೆ;
ಮಲಗಿ ಮರೆಯುವೆನೆಲ್ಲ ಎಂಬಾಸೆ ಒಂದು ಗಳಿಗೆ.
ಹಾಸಿ ಹೊದ್ದಿಸಿದಳಲು ನಿದ್ದೆಯನು ಕಣ್ಗೆ ಬಿಡದೆ,
ನಾನಿಲ್ಲಿ ಕೊರಗುವೆನು ಮೆತ್ತೆಯಲಿ ಮೆತ್ತಗಾಗಿ.
ನನ್ನ ಗುಡಿಸಿಲ ಮೇಲೆ ಮಲಗಿಹುದು ಬೆಳ್ಳಿಬೆಳಕು.
ಅರೆಬೆಳೆದ ಚಂದಿರನ ತಂಪಾದ ಎಳೆಯ ಬೆಳಕು.
ನನ್ನಿಯ, ನಿನ್ನನೇ ಬಯಸುವೆನು; ಅಗಲಿ, ಕೊರಗಿ
ನಾನಿಲ್ಲಿ ಕರಗುವೆನು ದುಃಖದಲಿ ತೇಲಿ ಮುಳುಗಿ.
- ಕೆ ಎಸ್ ನರಸಿಂಹಸ್ವಾಮಿಯವರು
No comments:
Post a Comment
Note: Only a member of this blog may post a comment.