ಮನವ ಮಂತ್ರಾಲಯವ ಮಾಡಿ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ..
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು
-----------------------೧----------------------
ಉಸಿರು ಉಸಿರಲಿ ರಾಘವೇಂದ್ರನ ಸ್ಮರಣೆ ಬೆರೆತಿರಲಾಗ..
ಉಸಿರು ಉಸಿರಲಿ ರಾಘವೇಂದ್ರನ ಸ್ಮರಣೆ ಬೆರೆತಿರಲಾಗ
ಪ್ರಭೆಯಲಿ ಗುರುವು ಕಾಣಿಸುವ..ಬ್ರಹ್ಮಾನಂದ ತೋರಿಸುವ
ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ..
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು
----------------------೨-----------------------
ಮಡಿಗೆ ಪೂಜೆಗೆ ಒಲಿಯದಾತನ...ಮಂತ್ರ ತಂತ್ರಕೆ ಸೋಲದಾತನ..
ಮಡಿಗೆ ಪೂಜೆಗೆ ಒಲಿಯದಾತನ...ಮಂತ್ರ ತಂತ್ರಕೆ ಸೋಲದಾತನ
ಭಕ್ತಿ ಗೆಲ್ಲುವುದು ಚಿತ್ತ ಶುದ್ಧಿ ನಿಲಿಸುವುದು
ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ..
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು
----------------------೩-------------------------
ನಿತ್ಯ ನಿರ್ಮಲ ಭಾವ ತುಂಬಿದ.. ಉತ್ತಮೋತ್ತಮ ಗುಣವ ಹೊಂದಿದ
ಸತ್ಯ ಸುಂದರನು ದರುಷನ ನೀಡಿ ಹರಸುವನು
ನಿತ್ಯ ನಿರ್ಮಲ ಭಾವ ತುಂಬಿದ ಉತ್ತಮೊತ್ತಮ ಗುಣವ ಹೊಂದಿದ
ಸತ್ಯ ಸುಂದರನು ದರುಷನ ನೀಡಿ ಹರಸುವನು
ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ..
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು..ಕಂಗಳ ಕಾಂತಿ ತುಂಬುವುದು..ಕಂಗಳ ಕಾಂತಿ ತುಂಬುವುದು
No comments:
Post a Comment
Note: Only a member of this blog may post a comment.