ಚಿತ್ರ: ನಾಂದಿ
ಗಾಯಕ: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ಹರಿಣಿ, ಕಲ್ಪನಾ
ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ...
ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ.....
ನಿನ್ನೊಂದು ನುಡಿ ಮುತ್ತು ಸವಿಜೇನಿನಂತೆ
ಆ ಸುಖದಿ ನಾ ಮರೆವೇ ಈ ಬಾಳ ಚಿಂತೆ
ಅದ ಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯೆಲ್ಲ......
No comments:
Post a Comment
Note: Only a member of this blog may post a comment.