ಚಿತ್ರ: ಪರಮಾತ್ಮ
ಇಸವಿ: ೨೦೧೧
ಗಾಯಕಿ: ಶ್ರೇಯಾ ಘೋಷಾಲ್
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ವಿ. ಹರಿಕೃಷ್ಣ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲಿ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು ಅಲ್ಲೀ ನೀನು ನನ್ನ ಕೂಗಿದಂತೆ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾನಿಂತೆ
ಮನಸಲ್ಲಿ ಅಂದ ಮಾತು ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾಗೀಚಲೇ ಹೆಸರೊಂದನು ಅಳಿಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನ... ನ ನ ನ ನ
ನಾನ ನಾನ ನಾನ
ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯೂ ಹೇಳಿದೆ ಸಾಂತ್ವನ
ನನ್ನ ವಿರಹವೂ ನಿನ್ನಿಂದ ಇನ್ನು ಚೆಂದ
ವಿವರಿಸಲಾರೆ ಎಲ್ಲಾ ನಾ ದೂರದಿಂದ
ನೆನಪನ್ನು ರಾಶಿಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲ್ಲಿ ನಾ ಹುಡುಕಲೇ ನಗುವೊಂದನು ಉರಿಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
No comments:
Post a Comment
Note: Only a member of this blog may post a comment.