ಚಿತ್ರ: ಹೊಂಬಿಸಿಲು
ಗಾಯನ: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ವಿಷ್ಣುವರ್ಧನ್, ಆರತಿ
ಜೀವ ವೀಣೆ ನೀಡು ಮಿಡಿತದ ಸಂಗೀತ
ಓ...ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು.....
ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ........ಲಲಲ.....ಆ......
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ.....
ಭಾವ.......
ಜೀವ.......
ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ.....
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ.....
No comments:
Post a Comment
Note: Only a member of this blog may post a comment.