ಏಳು ಸುತ್ತಿನ ಕೋಟೆ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ರುದ್ರಮೂರ್ತಿಶಾಸ್ತ್ರಿ | ೧೯೮೮
ಸಂಗೀತ: ಅಶ್ವಥ್-ವೈಧಿ
ಗಾಯನ: ಎಸ್.ಪಿ.ಬಿ
ಏನೊ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ಏನೊ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ನೀತಿ ಹೇಳುವ ನೀನೆ
ನೀತಿಯನು ಮುರಿದೆ..
ಬಾಯಿದ್ದರೂ ನೀ ಮೂಕನಾದೆ..
ಬಾಯಿದ್ದರೂ ನೀ ಮೂಕನಾದೆ..
ಏನೊ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕೂ..
ಎಚ್ಚರಿಕೆ ಬೇಕೂ..
ಜಗದೆಲ್ಲಾ ಕತ್ತಲೆಗೆ ನೀನಲ್ಲಾ ಬೆಳಕೂ..
ನೀನಲ್ಲಾ ಬೆಳಕೂ..
ಒಂದು ರೋಗದ ರೆಂಬೆ, ಕಡೆಗೂ ಗೆಲ್ಲುವೆನೆಂದೆ
ಒಂದು ರೋಗದ ರೆಂಬೆ, ಕಡೆಗೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದಾ ನರಳುತಿದೆ ಬದುಕೂ..
ಸಮೂಹ:
ಏನೊ ಮಾಡಲು ಹೋಗಿ..
ಏನು ಮಾಡಿದೆ ನೀನು..
ವಿಷದ ಬಳ್ಳಿಯಾ ಜೊತೆಗೆ, ಹೂಗಿಡವಾ ಕಡಿದೇ..
ಒಂದು ಕೋಪಕೆ ಎರಡು ಪಾಪಗಳಾ ಬೆಳೆದೆ..
ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ..
ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ
ಇದ್ದಂತೆ.. ಜಗವಿಹುದು, ನೀನು ಬದಲಾದೆ..
ಸಮೂಹ:
ಏನೊ ಮಾಡಲು ಹೋಗಿ..
ಏನು ಮಾಡಿದೆ ನೀನು..
ಹೆತ್ತೊಡಲು ತುಡಿಯುತಿದೆ, ತಳಮಳಿಸಿ ನೊಂದೂ..
ತಳಮಳಿಸಿ ನೊಂದೂ..
ಅಕ್ಕರೆಯಾ ಸೋದರಿಗೆ, ಕಣ್ಣೀರ ಬಿಂದೂ..
ಕಣ್ಣೀರ ಬಿಂದೂ..
ನಿನ್ನಿಂದಾ ಸುಖವಿಲ್ಲ, ನಿನ್ನೊಳಗೂ ಸುಖವಿಲ್ಲ
ನಿನ್ನಿಂದಾ ಸುಖವಿಲ್ಲ, ನಿನ್ನೊಳಗೂ ಸುಖವಿಲ್ಲ
ಸಮೂಹ:
ಏಳು ಸುತ್ತಿನ ಕೋಟೆ.. ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲೀ.. ಸೆರೆಯಾದೆ
No comments:
Post a Comment
Note: Only a member of this blog may post a comment.