ರಾಮ ನಾಮ ಪಾಯಸಕ್ಕೆ...
- ಪುರಂದರ ದಾಸ
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಬೆಸರಿ ಬಾಯಿ ಚಪ್ಪರಿಸಿರೋ ||
ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆ ತೆಗೆದು ಸಣ್ಣ ಶಾವಿಗೆ ಮಾಡಿರೋ
ಹೃದಯವೆಂಬೋ ಮಡಿಕೆಯಲ್ಲಿ ಭಾವವೆಂಬೋ ಹೆಸರು ಇಟ್ಟು
ಬುದ್ಧಿ ಇಂದ ಪಕ್ವವ ಮಾಡಿ ಹರಿವಾಣದಿ ಬಡಿಸಿಕೊಂಡು
ಆನಂದ ಆನಂದವೆಂಬೋ ತೇಗು ಬಂದಾಗ, ಎರಡು ತೇಗು ಬಂದಾಗ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೋ
No comments:
Post a Comment
Note: Only a member of this blog may post a comment.