ಬಾ ಇಲ್ಲಿ ಸಂಭವಿಸು...
- ಕುವೆಂಪು
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ ||
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ ಹೇ! ಭವವಿದೂರ
ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ
ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರು ಪಟ್ಟಿಯಲಿ ಇಲ್ಲಿ ಕಿರು ಗುಡಿಸಲಲಿ
ದೇಶ ದೇಶದಿ ವೇಷ ವೇಷಾಂತರ-ವನಾಂತು
ವಿಶ್ವ ಸಾರಥಿಯಾಗಿ ಲೀಲಾರಥ-ವನೆಂತು
ಚೋದಿಸಿರುವೆಯೊ ಅಂತೆ ಸೃಷ್ಟಿ ಲೋಲ
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ! ದಿವ್ಯ ಸಚ್ಚಿದಾನಂದ ಶೀಲ
No comments:
Post a Comment
Note: Only a member of this blog may post a comment.