ಚಿತ್ರ: ನಾಗರ ಹಾವು
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ.ಸುಶೀಲ
ನಟರು: ವಿಷ್ಣು ವರ್ಧನ್, ಆರತಿ, ಅಶ್ವಥ್
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ
ಕರ್ಪೂರದ ಗೊಂಬೆ ನಾನು
ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ನಿನ್ನನಾ ಪಡೆದೆ ಧನ್ಯ ನಾ ನಿಜದಿ
ಕರ್ಪೂರದ ಗೊಂಬೆ
No comments:
Post a Comment
Note: Only a member of this blog may post a comment.