ಚಿತ್ರ: ಮುಸ್ಸಂಜೆ ಮಾತು
ಹಾಡಿದವರು: ಶ್ರೇಯ ಘೋಶಾಲ್
ನಟರು: ಸುದೀಪ್, ರಮ್ಯ
ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ತಂದಾನೋ ತಂದಾನೋ ತನುವೆಲ್ಲ ತಂದಾನೋ
ಚಂದಾನೋ ಚಂದಾನೋ ಜಗವೆಲ್ಲ ಚಂದಾನೋ
ಮನಸೆಲ್ಲ something something ಉಯ್ಯಾಲೆ ತೂಗಿದೆ
ನಾ ಬರುವ ದಾರಿಯಲ್ಲಿ ಹೂ ಬಳುಕುತಾವ ನೋಡಾ
ನಾಚಿ ನಿಂತೆ ನಾನು ಅವು ಹಾಡಿತೊಂದು ಹಾಡ
ಹಾಡಲು ನಾನು ಜೊತೆಜೊತೆಗೆ ಅರಳಿತು ಮನವು ಒಳಗೊಳಗೇ
ನದಿಯಂತೆ ಹರಿಯುವೆನು ಮಂಜಂತೆ ಮುಸುಕುವೆನು
ತಿರುತಿರುಗೋ ಭೂಮಿಯ ನೋಡಲು ಚಂದ್ರಮಕೆ ಹಾರುವೆನು
ಮನದಲ್ಲೇ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು......
ಸೌಂದರ್ಯ ರಾಗ ಲಹರಿ ಬಂತೆನ್ನ ಮನಕೆ ಮರಳಿ
ತಲೆದೂಗುವಂತ ನಾದ ತಂಗಾಳಿ ಬೀಸೊ ರವಳಿ
ಅಲೆ ಅಲೆ ಮೇಲೆ ಮೇಲೆ ಬರುತಿರೋ ಹಾಗೆ
ಸುಖ ದುಃಖವೆರಡು ಜೀವನ ಧಾರೆ
ಮುಸ್ಸಂಜೆ ಮಾತಲ್ಲಿ ಈ ಜೀವ ಹಗುರಾಯ್ತು
ಕೋಗಿಲೆಯ ಹಾಡಂತೆ ಆ ಮಾತು ಇಂಪಾಯ್ತು
ಭಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು.....
No comments:
Post a Comment
Note: Only a member of this blog may post a comment.